ಜಾಣ ಕುರುಡೇ?

ಜಾಣ ಕುರುಡೇ?

ಚಿತ್ರ: ಗರ್‍ಡ್ ಆಲ್ಟ್‌ಮನ್

ಪ್ರಿಯ ಸಖಿ,

ಹೀಗೆ, ಆಶ್ರಮವೊಂದರಲ್ಲಿ ಗುರುವೊಬ್ಬನಿದ್ದ. ಮಹಾನ್ ಮಾನವತಾವಾದಿ. ಎಂತಹ ಸೂಕ್ಷ್ಮ ಮನಸ್ಸಿನವನೆಂದರೆ ತನ್ನ ಮಾತು, ಕೃತಿಗಳಿಂದ ಎಂದೂ ಇತರರನ್ನು ನೋಯಿಸಿದವನಲ್ಲ. ತನ್ನ ಶಿಷ್ಯರೊಡನೆಯೂ ಪ್ರೀತಿ ಮಮತೆಗಳಿಂದ ನಡೆದುಕೊಳ್ಳುತ್ತಿದ್ದ. ಬಿರು ಬೇಸಿಗೆಯಲ್ಲಿ ಗಿಡಗಳು ಸುಟ್ಟು ಹೋಗುತ್ತವಲ್ಲ ಎಂದೂ ಚಳಿಗಾಲದಲ್ಲಿ ಪಕ್ಷಿಗಳು ನಡುಗಿ ನೋಯುತ್ತವಲ್ಲಾ ಎಂದೂ, ಗಿಡದಿಂದ ಹೂಕಿತ್ತರೆ ಅದಕ್ಕೆ ನೋವಾಗುವುದೆಂದೂ ಪರಿತಪಿಸುತ್ತಿದ್ದ. ಇಷ್ಟೆಲ್ಲಾ ಸೂಕ್ಷ್ಮ ಮನಸ್ಸಿನ ಈ ಗುರು ಒಬ್ಬ ಮಾಂಸಾಹಾರಿಯಾಗಿದ್ದ. ಆ ತನ್ನ ತಪಸ್ಸಿನ ಶಕ್ತಿಗೆ, ಧೈರ್ಯ, ಬುದ್ಧಿವಂತಿಕೆಗೆ ತೇಜಸ್ಸಿಗೆ ತಾನು ಮಾಂಸಹಾರಿಯಾಗಿರುವುದೇ ಕಾರಣವೆಂದು ಬಲವಾಗಿ ನಂಬಿದ್ದ! ಈ ಆಶ್ರಮಕ್ಕೆ ಹೊಸ ಶಿಷ್ಯನೊಬ್ಬ ಆಗಮಿಸಿದ. ಅವನೋ ಅಪ್ಪಟ ಸಸ್ಯಾಹಾರಿ. ಜೊತೆಗೆ ಮಹಾನ್ ಬುದ್ಧಿವಂತ. ಅವನಿಗೆ ತನ್ನ ಗುರುಗಳ ಬುದ್ಧಿವಂತಿಕೆ, ಶಕ್ತಿ, ಎಲ್ಲಕ್ಕಿಂತ ಹೆಚ್ಚಾಗಿ ಅವರ ಮಾನವೀಯ ಗುಣಗಳು ಹೆಚ್ಚು ಮೆಚ್ಚುಗೆಯಾದವು. ಮಾನವೀಯತೆಯ ಕುರಿತು ಅವರು ಹೇಳುತ್ತಿದ್ದ ಕಥೆಗಳು, ಅದರಂತೆ ನಡೆಯಬೇಕೆಂದು ಅವರು ನೀಡುತ್ತಿದ್ದ ಉಪದೇಶ ಎಲ್ಲವೂ ಬಹಳ ಅಪ್ಯಾಯಮಾನವಾಗಿದ್ದವು. ಹಾಗೆಯೇ ಹೂವು, ಗಿಡ, ಮರ, ಪಕ್ಷಿಗಳ ಕುರಿತೂ ಅವರಿಗಿರುವ ಪ್ರೀತಿಯನ್ನು ಕಂಡು ಹೃದಯ ತುಂಬಿಬರುತ್ತಿತ್ತು.

ಆದರೆ ಅವನಿಗೆ ಅರ್ಥವಾಗದ್ದೊಂದೇ. ಅದು ಗುರುಗಳ ಮಾಂಸಾಹಾರ ಸೇವನೆ. ಇಷ್ಟೆಲ್ಲಾ ಪ್ರೀತಿ ತುಂಬಿದ ಹೃದಯದ ಗುರುಗಳು ಮಾಸಾಹಾರಿಗಳೇಕೆ ಎಂಬ ಪ್ರಶ್ನೆ ಅವನನ್ನು ಕಾಡುತ್ತಿತ್ತು. ಹಾಗೆಂದು ಗುರುಗಳನ್ನು ಎದುರಿಗೇ ಕೇಳಲಾದೀತೇ? ಸರಿ ಅವರ ಆಹಾರ ಕ್ರಮವನ್ನು, ಇಂಚಿಂಚೂ ಪರೀಕ್ಷಿಸತೊಡಗಿದ.

ಗುರುಗಳು ಆಹಾರದ ಸಮಯಕ್ಕೆ ಸರಿಯಾಗಿ ಭೋಜನ ಶಾಲೆಗೆ ಆಗಮಿಸುತ್ತಿದ್ದರು. ಆಹಾರ ಸೇವಿಸಿ ಹೊರಟು ಹೋಗುತ್ತಿದ್ದರು. ಆಹಾರ ತಯಾರಿ ವಿಧಾನವಾಗಲಿ, ಇವರ ಮಾಂಸಾಹಾರಕ್ಕಾಗಿ ನಡೆಯುವ ಪ್ರಾಣಿ ವಧೆಯನ್ನಾಗಲಿ ಅವರು ಕಂಡೇ ಇರಲಿಲ್ಲ.

ಈ ಹೊಸ ಶಿಷ್ಯ ಇದನ್ನೆಲ್ಲವನ್ನೂ ಅವರಿಗೆ ತೋರಿಸಲು ನಿರ್ಧರಿಸಿದ. ಒಂದು ದಿನ ಆ ವೇಳೆಯಲ್ಲಿ ಅವರನ್ನು ಪಾಕ ಶಾಲೆಗೆ ಕರೆತಂದ. ಅಲ್ಲಿ ಕೆಲ ಶಿಷ್ಯರು ಕೋಳಿಯೊಂದರ ಪುಕ್ಕ ಕಿತ್ತು, ಅದನ್ನು ಕೊಲ್ಲುವ ತಯಾರಿಯಲ್ಲಿದ್ದರು. ಇದನ್ನು ಕಂಡ ಗುರುಗಳು ಸಿಟ್ಟಿನಿಂದ ಕೂಗಾಡಿದರು. ಶಿಷ್ಯರು ತಮ್ಮ ಆಹಾರಕ್ಕಾಗಿಯೇ ಈ ಎಲ್ಲಾ ಹಿಂಸೆ ಎಂದಾಗ ಗುರುಗಳು ದಿಗ್ಭ್ರಾಂತರಾದರು!

ಪ್ರಿಯ ಸಖಿ, ಗುರುಗಳು ಮಾಂಸಾಹಾರ ತ್ಯಜಿಸಿ ಸಸ್ಯಾಹಾರಿಯಾದರೋ ಇಲ್ಲ ಇಂತಹ ಹಿಂಸೆಯನ್ನು ತಮ್ಮ ಕಣ್ಣಿಗೆ ತೋರಿಸಿದ್ದಕ್ಕಾಗಿ ಹೊಸ ಶಿಷ್ಯನನ್ನೇ ದಂಡಿಸಿದರೋ, ಮುಂದೆ ಆ ಕಥೆಯೇನಾಯ್ತೋ ನಮಗೆ ಬೇಡ. ಆದರೆ ಮೃದು ಹೃದಯದ, ಸಣ್ಣ ನೋವಿಗೂ ಸ್ಪಂದಿಸುವೆವೆಂದು ಹೇಳಿಕೊಳ್ಳುವಂತಹಾ ಈ ಗುರುವಿನಂತವರು ಇಂತಹಾ ಹಿಂಸಾಚಾರವನ್ನು ನಿತ್ಯ ತಮ್ಮ ಮನೆಗಳಲ್ಲಿ ನೋಡುತ್ತಲೇ ಇರುತ್ತಾರಲ್ಲವೇ ? ನಮ್ಮ ಕಥೆಯ ಗುರುವಿನಂತೆ ಹಿಂಸೆಯ ಅರಿವು ಅವರಿಗಿರುವುದಿಲ್ಲವೊ, ಈ ಕುರಿತು ಜಾಣ ಕುರುಡೋ. ಪ್ರಾಣಿಗಳಿರುವುದೇ ನಮ್ಮ ಆಹಾರಕ್ಕೆ ಅದರಲ್ಲೆಂತಾ ಹಿಂಸೆ ಎಂಬ ದಿವ್ಯ ಬುದ್ಧಿವಂತಿಕೆಯೋ? ಏನೆಂಬುದು ಅವರವರಿಗೇ ಗೊತ್ತಿರಬೇಕಷ್ಟೇ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾನು ರೆಪ್ಪೆ ಮುಚ್ಚುತಿದೆ
Next post ಎಡಬಿಡಂಗಿ

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

cheap jordans|wholesale air max|wholesale jordans|wholesale jewelry|wholesale jerseys